ದಿ. ಕೆ. ಸುಂದರ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 11 , 2013
|
ನವ೦ಬರ್ 16 , 2013
|
ದಿ. ಕೆ. ಸುಂದರ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ
ಉಡುಪಿ :
ಕಥಕ್ಕಳಿಯಷ್ಟೇ ಯಕ್ಷಗಾನಕ್ಕೂ ಮಾನ್ಯತೆ ಸಿಗಬೇಕು. ಯಕ್ಷಗಾನ ದೆಹಲಿಯಲ್ಲೂ ಮಾನ್ಯತೆ ಪಡೆಯಲಿದೆ. ಎಂದು ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಅವರು ಇಂದು ರಂಗಸ್ಥಳ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್ ವತಿಯಿಂದ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಭವನದಲ್ಲಿ ಹಮ್ಮಿಕೊಂಡ ದಿ. ಕೆ. ಸುಂದರ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸುಂದರ ಶೆಟ್ಟಿ ಸಮಾಜಮುಖಿ ಕಳಕಳಿ ಇರುವ ವ್ಯಕ್ತಿ. ಕಂಬಳ. ಯಕ್ಷಗಾನ ಇನ್ನಿತರ ಜಾನಪದ ವಿಚಾರದೆಡೆಗೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡವರು. ಇಂತಹ ವ್ಯಕ್ತಿತ್ವವನ್ನು ಸಮಾಜದಲ್ಲಿ ಬಿಂಬಿಸುವ ಕೆಲಸವಾಗಬೇಕು. ಆಗ ಸಮಾಜವೂ ಒಳ್ಳೆಯ ಕೆಲಸ ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಂದವರು ಹೇಳಿದರು.
ಹಿರಿಯ ತಾಳಮದ್ದಳೆ ಅರ್ಥದಾರಿ ಹಾಗೂ ಪ್ರಗತಿಪರ ಕೃಷಿಕ ಕುತ್ಲೋಡಿ ವಾಸು ಶೆಟ್ಟಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ, ಬಡಗುತಿಟ್ಟಿನ ಸ್ತ್ರೀವೇಷಧಾರಿ ಅರಾಟೆ ಮಂಜುನಾಥ್ ರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿರೂರು ಲಕ್ಷ್ಮೀವರತೀರ್ಥ ಸ್ವಾಮಿಗಳು ಆಶೀರ್ವಚಿಸಿದರು. ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾಧ್ಯಕ್ಷ ಯುವರಾಜ್ ಪಿ, ಮಾಜಿ ಶಾಸಕ ಯು.ಆರ್ ಸಭಾಪತಿ, ಪ್ರಕಾಶ್ ಶೆಟ್ಟಿ, ಮನೋಹರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕೃಪೆ :http://gulfkannadiga.com
|
|
|